ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ 2015ರ ಜುಲೈನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಆಗ ಬಿಜೆಪಿ ಶಾಸಕ ಋಶಿಕೇಶ್ ಪಟೇಲ್ ಅವರ ಕಚೇರಿ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಕಚೇರಿಯನ್ನು ಧ್ವಂಸ ಮಾಡಿದ್ದರು. ಈ ಸಂಬಂಧ ಹಾರ್ದಿಕ್ ಪಟೇಲ್, ಲಾಲ್ಜಿತ್ ಪಟೇಲ್ ಮತ್ತು ಅತುಲ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕಳೆದ ಮೂರು ವಿಚಾರಣೆಗೆ ಹಾರ್ದಿಕ್ ಗೈರು ಹಾಜರಾಗಿದ್ದರು. ಜತೆಗೆ ಬುಧವಾರದ ವಿಚಾರಣೆಗೆ ಉಳಿದ ಇಬ್ಬರು ಮುಖಂಡರೂ ಗೈರು ಹಾಜರಾಗಿದ್ದರು. ಹೀಗಾಗಿ ನ್ಯಾಯಾಲಯ ಮೂವರ ವಿರುದ್ಧ ವಾರಂಟ್ ಹೊರಡಿಸಿದೆ.