ನಿಯಮ ಮೀರಿ ಜನವಸತಿ ಪ್ರದೇಶದಲ್ಲಿ ಕೋಕ್ ಸಲ್ಫರ್ ಘಟಕ ಸ್ಥಾಪಿಸಲಾಗಿದೆ. ಜನರ ಹೋರಾಟದ ಫಲವಾಗಿ ಸರ್ಕಾರ 2016 ರಲ್ಲಿ ಹೊರಡಿಸಿದ ಗೆಜೆಟ್ ಅಧಿಸೂಚನೆಗೂ ಯಾವುದೇ ಬೆಲೆ ಇಲ್ಲದಂತಾಗಿದೆ. ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸದೇ, ಎಂಆರ್ಪಿಎಲ್ ಉದ್ಧಟತನ ತೋರುತ್ತಿದೆ. ಇದರಿಂದ ಜೋಕಟ್ಟೆ ಭಾಗದ ಮನೆಗಳಲ್ಲಿ ಬೂದಿಯ ಮಳೆ ಸುರಿಯುತ್ತಿದೆ ಎಂದು ಅವರು ದೂರಿದ್ದಾರೆ.