ಚನ್ನಮ್ಮನ ಕಿತ್ತೂರು: ಕರ್ನಾಟಕದ ಆನಂದ ಹೊಳಿಹಡಗಲಿ, ಲೀನಾ ಸಿದ್ದಿ ಹಳಿಯಾಳ, ಪ್ರೇಮಾ ಹುಚ್ಚಣ್ಣನವರ ಮತ್ತು ಲಕ್ಷ್ಮಿ ಪಾಟೀಲ ಅವರು ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಬುಧವಾರ ನಡೆದ ರಾಷ್ಟ್ರಮಟ್ಟದ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಪುರುಷರ ಮೊದಲ ಜೋಡಿಯ ಪೈಪೋಟಿಯಲ್ಲಿ ಉತ್ತರ ಪ್ರದೇಶದ ವರುಣ್ ಕುಮಾರ್ ಪಂಜಾಬ್ನ ಗುರುಲಾಲ್ ಸಿಂಗ್ ಅವರನ್ನು ಚಿತ್ ಮಾಡಿದರು. ಎರಡನೇ ಜೋಡಿಯ ಸ್ಪರ್ಧೆಯಲ್ಲಿ ಚಂಡಿಗಡದ ಪ್ರವೀಣ ಕುಮಾರ ಡಾಗರ ಮಹಾರಾಷ್ಟ್ರದ ಕುರುದ ವಾಡಿಯ ಸುನೀಲ ಸೇವತಕರ ಎದುರು ಜಯ ಪಡೆದರು.
ಮೂರನೇ ಜೋಡಿಯ ಹೋರಾಟ ದಲ್ಲಿ ಮಹಾರಾಷ್ಟ್ರದ ಸಚಿನ್ ನಾರೆ ಅವರನ್ನು ಮಣಿಸಿದ ಕಿತ್ತೂರಿನ ಆನಂದ ಹೊಳಿಹಡಗಲಿ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳಿದರು.