ಸಾವಯವ ಕೃಷಿಕರ ಸಹಕಾರ ಒಕ್ಕೂಟದ ಅಧ್ಯಕ್ಷ ಕೃಪಾ ಮಾತನಾಡಿ, ‘ಸಹಕಾರ ಇಲಾಖೆ ನಿಯಮದಡಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಂದ ಒಕ್ಕೂಟ ರಚಿಸಲಾಗಿದೆ. ಷೇರು ಬಂಡವಾಳ ಸಂಗ್ರಹಿಸಿ, ಸಾವಯವ ಕೃಷಿ ಉತ್ಪನ್ನ ಖರೀದಿಸಲಾಗುತ್ತಿದೆ. ಈ ವರ್ಷ ಒಕ್ಕೂಟ ₹ 2.50 ಲಕ್ಷ ಲಾಭ ಗಳಿಸಿದೆ. ರೈತರಿಗೆ ಉಚಿತ ಬೀಜ, ಸಾವಯವ ಗೊಬ್ಬರ ಮತ್ತು ತಾಂತ್ರಿಕ ಮಾಹಿತಿ ನೀಡಿ ಬೆಳೆಯನ್ನೂ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಿಲಾಗುತ್ತದೆ. ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಮಾರಾಟ ಮಳಿಗೆ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.