ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗಕ್ಕೆ ತಜ್ಞ ಸಂಪನ್ಮೂಲ ವ್ಯಕ್ತಿಯನ್ನಾಗಿ ನಗರದ ಹವಿನಾಳೆ ಭೀಮಗೊಂಡ ರೇವಪ್ಪ ಅವರನ್ನು ಸರ್ಕಾರ ನೇಮಕ ಮಾಡಿದೆ.
ನ.7ರಂದು ಆಯೋಗದ ಮುಂದೆ ಹಾಜರಾಗಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಚಾರ ಮಂಡಿಸುವಂತೆ ಹವಿನಾಳೆ ಭೀಮಗೊಂಡ ರೇವಪ್ಪ ಆಯೋಗದ ಉಪಕಾರ್ಯದರ್ಶಿ ವೈ.ಬಿ.ಹೊನ್ನಲಿಂಗಪ್ಪ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.