ತಾತ, ಅಜ್ಜಿ, ಅಪ್ಪ, ಅಮ್ಮ, ಅತ್ತೆ- ಮಾವ, ಅಣ್ಣ- ತಮ್ಮ, ಅಕ್ಕ- ತಂಗಿ ಹೀಗೆ ಎಲ್ಲ ಸಂದರ್ಭದಲ್ಲೂ ಒಂದೇ ಸೂರಿನಡಿ ಹೊಂದಿರುವ ದಿವಾನ್ ಕುಟುಂಬದಲ್ಲಿ ನಡೆಯುವ ಘಟನಾವಳಿಗಳೇ ಈ ಧಾರಾವಾಹಿಯ ಕಥಾ ವಸ್ತು. ದಿವಾನ್ ಕುಟುಂಬದಲ್ಲಿ ಚಿಕ್ಕವಳದಾಗಿನಿಂದಲೂ ಮನೆ ಮಗಳಂತೆ ಬೆಳೆದ ವಿದ್ಯಾ ಹೊರಗಿನಿಂದ ಬಂದವಳಾದರೂ ಮನೆಯ ಸದಸ್ಯಳಂತೆಯೇ ಎಲ್ಲರೊಂದಿಗೆ ಬೆರೆತು ಅವರ ಸಂತೋಷಕ್ಕೆ ಕಾರಣಳಾಗುತ್ತಾಳೆ. ಮನೆಯೊಡತಿಯ ಪುತ್ರ ವಿನಾಯಕ ಸದಾಶಿಸ್ತಿನ ಸಿಪಾಯಿ. ಸದಾ ಸುತ್ತಲಿನ ಪರಿಸರ ಶುದ್ಧವಾಗಿರಬೇಕು ಎಂದು ಬಯಸುವ ವ್ಯಕ್ತಿ.