ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಉಳಿಸಲು ವಾಸ್ತು

Last Updated 16 ಜೂನ್ 2018, 12:26 IST
ಅಕ್ಷರ ಗಾತ್ರ

ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಹೊಂದಬಹುದು ಎನ್ನುತ್ತದೆ ವಾಸ್ತು.

* ಪಿರಮಿಡ್‌ ಮಾದರಿಯನ್ನು ಮನೆಯಲ್ಲಿ ಇರಿಸುವುದರಿಂದ ಅನುಕೂಲವಾಗುತ್ತದೆ. ಇದನ್ನು ಯಾವುದಾದರೂ ಕೋಣೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿಡಬೇಕು.

* ಮನೆಯ ಮಂದಿ ಶಾಂತಿ, ಅನ್ಯೋನ್ಯವಾಗಿ ಇರುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

* ಮನೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಕೊರತೆ ಇರಬಾರದು ಎಂದರೆ, ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು.

* ಮನೆಯ ಒಂದೇ ಕೋಣೆಗೆ ಎರಡು ಬಾಗಿಲು ಇದ್ದರೆ, ಅದು ಎದುರು ಬದುರು ಇರಬಾರದು. ಹೀಗಿದ್ದರೆ ಹಣ ಬಂದ ಹಾಗೆ ಹೋಗುತ್ತದೆ.

* ಹಣದ ಲಾಕರ್‌ನ ಮುಂಭಾಗದಲ್ಲಿ ಕನ್ನಡಿಯನ್ನು ಇಡಿ. ಕನ್ನಡಿಯಲ್ಲಿ ಲಾಕರ್‌ ಬಿಂಬ ಕಾಣುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.

* ಅಕ್ವೇರಿಯಂ ಅನ್ನು ‌ಲಿವಿಂಗ್‌ ರೂಮ್‌ನ ಈಶಾನ್ಯ ದಿಕ್ಕಿನಲ್ಲಿರಿಸಿ. ಅದು ಸದಾ ಸ್ವಚ್ಛವಾಗಿರುವಂತೆ ಎಚ್ಚರವಹಿಸಿ.

* ನೇರಳೆ ಬಣ್ಣದ ಹೂ ಬಿಡುವ ಗಿಡಗಳನ್ನು ಮನೆಯಲ್ಲಿ ಇರಿಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ನೇರಳೆ ಬಣ್ಣದ ಕುಂಡದಲ್ಲಿ ಮನಿಪ್ಲಾಂಟ್ ಬೆಳೆಯಿರಿ.
(ಮಾಹಿತಿ: ವಾಸ್ತುಶಾಸ್ತ್ರಗುರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT