ಮಹಾರಾಷ್ಟ್ರದ ತಂಡದ ಹಿಂದಿನ ವೇಗದ ಬೌಲರ್ ಆಗಿದ್ದ, ಈಗಿನ ಪುಣೆ ಪಿಚ್ ಕ್ಯೂರೇಟರ್ ಪಾಂಡುರಂಗ ಸಲಗಾಂವ್ಕರ್ ಬುಕ್ಕಿಗೆ ಅನುಕೂಲಕರ ಆಗುವಂತೆ ಪಿಚ್ ಸಿದ್ಧಪಡಿಸಿದ್ದರು ಎಂಬ ಆರೋಪ ಬುಧವಾರ ಕೇಳಿ ಬಂದಿತ್ತು. ಮಾರುವೇಷದ ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಗೊಂಡಿತ್ತು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಸ್ವಲ್ಪ ಮುನ್ನ ಈ ಸುದ್ದಿ ಬಹಿರಂಗಗೊಂಡಿತ್ತು. ತಕ್ಷಣ ಸಲಗಾಂವ್ಕರ್ ಅವರನ್ನು ಬಿಸಿಸಿಐ ಅಮಾನತು ಮಾಡಿತ್ತು.