ಬೆಂಗಳೂರು: ‘ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ಕೆ.ಆರ್. ಪುರ ಕ್ಷೇತ್ರದ ಇಸ್ಲಾಂಪುರದಲ್ಲಿ ಟಿಪ್ಪುಜಯಂತಿಯನ್ನು ನವೆಂಬರ್ 10ರಂದು ವಿಜೃಂಭಣೆಯಿಂದ ಆಚರಿಸುತ್ತೇವೆ. ಸಾಧ್ಯವಿದ್ದರೆ, ಬಿಜೆಪಿ ಸಂಸದರು ಅಲ್ಲಿಗೆ ಬಂದು ತಡೆಯಲಿ’ ಎಂದು ಸಂಘದ ಅಧ್ಯಕ್ಷೆ ಎನ್.ಸಿ. ಜ್ಯೋತಿ ಸವಾಲು ಹಾಕಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಜಯಂತಿ ಹೆಸರಿನಲ್ಲಿ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ, ಸಂಸದರಾದ ಪ್ರತಾಪ್ ಸಿಂಹ ಮತ್ತು ಶೋಭಾ ಕರಂದ್ಲಾಜೆ ಅವರು ಸಮಾಜದಲ್ಲಿ ಶಾಂತಿ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದರು.
‘ಕೆಲ ಬಿಜೆಪಿ ನಾಯಕರು ದೇಶದಲ್ಲಿನ 35 ಕೋಟಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಟಿಪ್ಪುವಿನ ಇತಿಹಾಸ ತಿಳಿಯದ ಅವರು ಚುನಾವಣಾ ರಾಜಕೀಯದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.