‘ನಾವು ಬದುಕಿನಲ್ಲಿ ಕಮಲದಂತೆ ಅರಳಬೇಕು. ನಮ್ಮ ಸುತ್ತ ಮುತ್ತ ಸುಗಂಧ ಹರಡುವಂತಾಗಬೇಕು. ಎಲ್ಲವನ್ನು ಬಲ್ಲ ಜ್ಞಾನಿಗಳ ಮಾತುಗಳೇ ನಮಗೆಲ್ಲಾ ಮಾರ್ಗಸೂಚಿಗಳು. ಅವು ನಮ್ಮ ಬದುಕನ್ನು ಶ್ರೀಮಂತ ಗೊಳಿಸುತ್ತವೆ. ನಮ್ಮ ದೇಶದ ಅತಿ ದೊಡ್ಡ ಸಂಪತ್ತೇ ಜ್ಞಾನ ಸಂಪತ್ತು, ಬಲ್ಲವರ, ಸಂತರ. ಶರಣರ ಮಹಾತ್ಮರ ಮಾತುಗಳು ಎಷ್ಟೊಂದು ಅದ್ಭುತ. ಅವುಗಳು ನಮ್ಮನ್ನು ಆಕಾಶದೆತ್ತರಕ್ಕೆ, ಪ್ರಪಂಚದ ಎತ್ತರಕ್ಕೆ ನಮ್ಮ ಮನಸ್ಸನ್ನು ತೆಗೆದುಕೊಂಡು ಹೋಗುತ್ತವೆ. ಅಷ್ಟೇ ಅಲ್ಲದೇ ದಿವ್ಯವಾದ ವಸ್ತುವಿನ ಮಧ್ಯೆ ಬೆಳೆಸುವಂತಾಗು ತ್ತದೆ’ ಎಂದರು.