ಇಲ್ಲಿನ ಅನಂತಪದ್ಮನಾಭ ದೇಗುಲದಲ್ಲಿ ನಡೆಯುವ 10 ದಿನಗಳ ಜಾತ್ರೆಯ ಕೊನೆಯ ದಿನ ರನ್ವೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತದೆ. ಆ ದಿನ ‘ಆರಾಟ್ಟು’ ಮಹೋತ್ಸವ (ದೇಗುಲದ ವಿಗ್ರಹಗಳ ಧಾರ್ಮಿಕ ಸ್ನಾನ ಕಾರ್ಯಕ್ರಮ) ನಡೆಯುತ್ತದೆ. ಇದಕ್ಕಾಗಿ ವಿಗ್ರಹಗಳನ್ನು ಶಾನ್ಗುಮುಘಮ್ ಬೀಚ್ಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಅರ್ಚಕರು, ತಿರುವಾಂಕೂರು ರಾಜಮನೆತನದವರು, ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ವಿಮಾನ ನಿಲ್ದಾಣದ ರನ್ವೇ ಮೂಲಕ ಹಾದುಹೋಗುತ್ತದೆ.