ಆಕಸ್ಮಿಕವಾಗಿ ನನಗೆ ಒಂದು ಕೋಟಿ ರೂಪಾಯಿ ಸಿಕ್ಕರೆ ಅದರ ಮೂಲ ಯಾವುದು ಎಂದು ಮೊದಲು ಯೋಚಿಸುತ್ತೇನೆ. ನನ್ನ ಪರಿಶ್ರಮದ ಫಲವಾಗಿದ್ದಲ್ಲಿ ನನಗಾಗಿಯೇ ಬಳಸಿಕೊಂಡು, ಒಂದಿಷ್ಟು ಭಾಗವನ್ನು ಅವಶ್ಯಕತೆ ಇದ್ದ ವ್ಯಕ್ತಿ/ಸಂಸ್ಥೆಗೆ ದಾಸೋಹ ಮಾಡುತ್ತೇನೆ. ಆದರೆ ನನ್ನ ಯಾವುದೇ ಪರಿಶ್ರಮವಿಲ್ಲದೇ ಈ ಮೊತ್ತ ನನಗೆ ಸಿಕ್ಕಿದ್ದರೆ ಪರಧನ ಪರಕ್ಕೆ ಸೇರಿದ್ದೆಂಬಂತೆ, ಆ ಮೊತ್ತದಲ್ಲಿಯ ಒಂದು ಪೈಸೆಯನ್ನೂ ಬಳಸಿಕೊಳ್ಳಲು ನಾನು ಯೋಗ್ಯನಲ್ಲವೆಂದು ಭಾವಿಸಿ, ಎಲ್ಲವನ್ನೂ ದಾಸೋಹ ಮಾಡುತ್ತೇನೆ.
-ವೆಂಕಟೇಶ ಕೆ. ಜನಾದ್ರಿ, ಲೆಕ್ಕಪತ್ರ ಅಧೀಕ್ಷಕ, ಕನಕಗಿರಿ, ಗುಲ್ಬರ್ಗಾ