ವಿಶಾಖಪಟ್ಟಣದಿಂದ ಒಂಬತ್ತು ಮಹಿಳೆಯರ ತಂಡ ರಾಯಗಡ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಹೊರವಲಯದಲ್ಲಿರುವ ನಾಗಬಲಿ ನದಿಯ ಸೇತುವೆ ಬಳಿ ಸಾಕಷ್ಟು ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡಿದ್ದಾರೆ. ನಂತರ ಮತ್ತಷ್ಟು ಫೋಟೊ ತೆಗೆದುಕೊಳ್ಳುವ ಸಲುವಾಗಿ ನದಿಗೆ ಇಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.