ಹೆಬ್ರಿ: ಹೆಬ್ರಿ ಸೋಮೇಶ್ವರ ವನ್ಯಜೀವಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆಗುಂಬೆ ಘಾಟಿಯಲ್ಲಿ ಮಂಗಗಳನ್ನು ಹಿಡಿದು ತಂದು ವಿಷ ಹಾಕಿ ಕೊಂದಿರುವುದು ಗುರುವಾರ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ಸೋಮೇಶ್ವರ ವನ್ಯಜೀವಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮಂಗಗಳು ಜೀವನ್ಮರಣ ಹೋರಾಟ ನಡೆಸುತ್ತಿದ್ದುದು ಕಂಡುಬಂತು. ಸ್ಥಳೀಯರು ಮತ್ತು ಇಲಾಖೆ ಸಿಬ್ಬಂದಿ ಬದುಕಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಇತ್ತೀಚೆಗೆ ಕಬ್ಬಿನಾಲೆಯಲ್ಲೂ ಇಂತಹ ಘಟನೆ ನಡೆದಿತ್ತು.