ಭಕ್ತ ಕುಂಬಾರ ಚಿತ್ರದ ಹಾಡಿನಲ್ಲಿ, ‘ಮಾನವ ಮೂಳೆ ಮಾಂಸದ ತಡಿಕೆ, ಅದರ ಮೇಲಿದೆ ತೊಗಲಿನ ಹೊದಿಕೆ’ಎಂಬ ಸಾಲುಗಳಿವೆ. ಮಾನವ ದೇಹ ಮೂಳೆ ಮಾಂಸಗಳ ಜೊತೆಗೆ ಮಲ ಮೂತ್ರಗಳನ್ನೂ ತುಂಬಿಕೊಂಡಿರುವುದು ಸತ್ಯವಲ್ಲವೇ? ಇಂಥ ಮಾನವ, ದೇವಸ್ಥಾನ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುತ್ತದೆಯೇ? ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನವನ್ನು ಮಾಡಿದವರು ದೇವಾಲಯವನ್ನು ಪ್ರವೇಶಿಸಿದರೆ ಲೋಪವಿಲ್ಲ. ಆದರೆ ಮಾಂಸ ಸೇವಿಸಿದವರು ಪ್ರವೇಶ ಮಾಡಿದರೆ ಅಪರಾಧವೇ?