‘ಸ್ವಲ್ಪ ಸಮಯದಲ್ಲೇ ಸ್ಥಳಕ್ಕೆ ಬಂದ ಎಎಸ್ಐವೊಬ್ಬರು, ‘ಅವರಿಬ್ಬರನ್ನು ಎದುರು ಹಾಕಿಕೊಳ್ಳಬೇಡಿ. ಸುಮ್ಮನೆ ಹೋಗಿ’ ಎಂದು ನಮಗೇ ಬುದ್ಧಿ ಹೇಳಿದರು. ಅಲ್ಲದೆ, ನಮ್ಮ ಬಳಿ ಇದ್ದ ಕೀಯನ್ನು ಅವರಿಗೆ ಕೊಟ್ಟು ಸ್ಥಳದಿಂದ ಹೋಗುವಂತೆ ಹೇಳಿದರು. ಈ ಬಗ್ಗೆ ದೂರು ಕೊಡಲು ಗುರುವಾರ ರಾತ್ರಿ ಠಾಣೆಗೆ ತೆರಳಿದರೆ, ಪ್ರಕರಣ ದಾಖಲಿಸಿಕೊಳ್ಳದೆ ಸತಾಯಿಸಿದರು’ ಎಂದು ಭರತ್ ಆರೋಪಿಸಿದ್ದಾರೆ.