ಬಹಳಷ್ಟು ಮುಖ್ಯ ರಸ್ತೆಗಳ ನಡುವೆ ಕುಳಿ ಬಿದ್ದಿದೆ. ಹೀಗಾಗಿ, ಕೃಷಿ ಜಮೀನುಗಳಿಗೆ ಪರಿಕರಗಳನ್ನು ಸಾಗಿಸುವುದು ಗ್ರಾಮೀಣ ಜನರಿಗೆ ಕಷ್ಟವಾಗುತ್ತಿದೆ. ಗೌಡಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೆಸರು ಮಯವಾಗಿದೆ. ಇಲ್ಲಿ ನೀರಿನ ಹರಿವು ಹೆಚ್ಚಿ ದೊಡ್ಡ ಹಳ್ಳಗಳು ಬಿದ್ದಿವೆ ಎನ್ನುತ್ತಾರೆ ಕೃಷಿಕ ಸುರೇಶ್ ಕುಮಾರ್.
ರಾಸುಗಳ ಕಾಲು ರಸ್ತೆ ಗುಂಡಿಯಲ್ಲಿ ಸಿಲುಕಿ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.