‘ಹಾನಗಲ್ ತಾಲ್ಲೂಕಿನಲ್ಲಿರುವ ಸುಮಾರು 98 ಕೆರೆಗಳಿಗೆ ಧರ್ಮಾ ಜಲಾಶಯದ ಮೂಲಕ ನೀರು ತುಂಬಿಸಲು ಬೆಳಿಗ್ಗೆಯಿಂದ ಬಿಡಲಾಗುತ್ತಿದೆ. ಸದ್ಯಕ್ಕೆ ಎಂಟತ್ತು ದಿನ ನೀರು ಬಿಡುವ ಬಗ್ಗೆ ನಿರ್ಧರಿಸಲಾಗಿದ್ದು, ಮುಂದೆ ಮಳೆ ಸ್ಥಿತಿಗತಿಯನ್ನು ನೋಡಿ, ನೀರನ್ನು ಎಷ್ಟು ಪ್ರಮಾಣದಲ್ಲಿ ಬಿಡಬೇಕೆಂಬುದನ್ನು ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಹಾನಗಲ್ ನೀರಾವರಿ ಇಲಾಖೆಯ ಎಸ್ಒ ದೇವರಾಜು ಹೇಳಿದರು.