ಕಿರವತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಮಾಪುರ, ಅಲ್ಕೇರಿ, ಹುಣಶೆಟ್ಟಿಕೊಪ್ಪದ ಮದನೂರು ಭಾಗದಲ್ಲಿ 6 ಆನೆಗಳಿರುವ 3 ಗುಂಪು ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿದ್ದು, ಸುಮಾರು ನಾಲ್ಕೈದು ಎಕರೆ ಭತ್ತ, ಕಬ್ಬು ಬೆಳೆಗಳು ನಾಶಮಾಡಿದೆ. ಸುಮಾರು ಎಲ್ಲ ಭಾಗಗಳಲ್ಲಿಯೂ ಬೆಳೆ ಕಟಾವಿಗೆ ಬರುತ್ತಿದ್ದು, ಈ ವೇಳೆಯೇ ಕಷ್ಟ ಪಟ್ಟು ಬೆಳೆದ ಬೆಳೆಗಳು ರೈತರ ಕೈಗೆ ಸಿಗದೆ ನಿರಾಶೆಗೊಳ್ಳುತ್ತಿದ್ದಾರೆ.