‘ಈಚೆಗೆ ಬಾಗಲಕೋಟೆ–ವಿಜಯಪುರ ಜಿಲ್ಲೆಯ ಕೆಲವು ರಾಜಕೀಯ ಮುಖಂಡರನ್ನು ಕರೆಯಿಸಿ ಕಾರ್ಖಾನೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಕಾರ್ಖಾನೆ ಸುತ್ತಮುತ್ತಲಿನ ಕೋರಹಳ್ಳಿ, ಆಲಹಳ್ಳಿ, ಬಬಲೇಶ್ವರ, ಆಸಂಗಿಹಾಳ, ನಾಗರಹಳ್ಳಿ, ಉಚಿತನಾವದಗಿ, ಗುಂದಗಿ, ದೇವಣಗಾಂವ, ಬಮ್ಮನಹಳ್ಳಿ, ದೇವರನಾವದಗಿ, ಕುಮಸಗಿ ಹೀಗೆ ಹಲವಾರು ಗ್ರಾಮಗಳ ರೈತರನ್ನು ಆಹ್ವಾನಿಸದೇ ಅಗೌರವ ತೋರಿಸಿರುವುದು ಖಂಡನೀಯ’ ಎಂದು ಇಲ್ಲಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.