ಮೈಸೂರು: ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಜಯಶ್ರೀ ಶ್ರೀಧರ್ ಅವರು ಚಾಮುಂಡೇಶ್ವರಿ ದೇವಸ್ಥಾನದ ಗರ್ಭಗುಡಿಯ ಬೆಳ್ಳಿಯ ಬಾಗಿಲಿಗೆ ಚಿನ್ನದ ಪಟ್ಟಿ ಅರ್ಪಿಸಿದ್ದಾರೆ.
ಚಿನ್ನದ ಪಟ್ಟಿಯ ಮೌಲ್ಯ ಸುಮಾರು ₹ 26 ಲಕ್ಷ ಎಂದು ಮೂಲಗಳು ತಿಳಿಸಿವೆ.
‘1987ರಲ್ಲಿ ನಾನು ವಕೀಲ ವೃತ್ತಿ ಆರಂಭಿಸಿದ್ದೆ. ಚಾಮುಂಡಿ ದೇವಿಗೆ ಶಾಶ್ವತ ಕಾಣಿಕೆ ನೀಡಬೇಕು ಎಂದು ಆ ಸಂದರ್ಭದಲ್ಲೇ ನಿರ್ಧರಿಸಿದ್ದೆ. ಪತಿ ಹಾಗೂ ಕುಟುಂಬದ ಸದಸ್ಯರ ಸಹಕಾರದಿಂದ ದೊಡ್ಡ ಕಾಣಿಕೆ ನೀಡಲು ಸಾಧ್ಯವಾಗಿದೆ’ ಎಂದು ಜಯಶ್ರೀ ಪ್ರತಿಕ್ರಿಯಿಸಿದ್ದಾರೆ.