ಆರು ತಿಂಗಳ ಹಿಂದೆ ಮಂಗಳೂರಿನಿಂದ ಸಿರಿಯಾಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಆರೋಪಿ ಮನಾಫ್ನಿಗೆ ಎನ್ಐಎ ತಂಡವು ಎಚ್ಚರಿಕೆ ನೀಡಿ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿತ್ತು. ಬಳಿಕ ಆತನ ಮೇಲೆ ಎನ್ಐಎ ನಿಗಾ ಇಟ್ಟಿತ್ತು. 1988ರಲ್ಲಿ ನಕಲಿ ಪಾಸ್ಪೋರ್ಟ್ ಬಳಸಿ ಕೊಲ್ಲಿರಾಷ್ಟ್ರಗಳಿಗೆ ಪ್ರಯಾಣಿಸಿದ್ದ ಹಂಸ 20 ವರ್ಷಗಳ ಬಳಿಕ ಮುಂಬೈನಲ್ಲಿ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದ. ಬಿಡುಗಡೆಯಾದ ಬಳಿಕ ಐಎಸ್ ವಕ್ತಾರನೊಂದಿಗೆ ಹಂಸ ನಿಕಟ ಸಂಪರ್ಕ ಹೊಂದಿದ್ದ. ಸಂಘಟನೆಗೆ ಹೆಚ್ಚು ಮಂದಿಯನ್ನು ಕಳುಹಿಸುವುದು ಆತನ ಉದ್ದೇಶವಾಗಿತ್ತು ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.