ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ವರ್ಮಾ, ‘ದೊರೆಸ್ವಾಮಿ ಅವರು 13ನೇ ವಯಸ್ಸಿನಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಆರು ದಶಕಗಳ ಕಾಲ ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದರು. ಅಂಚೆ ಇಲಾಖೆ ಅವರ ಸ್ಮರಣಾರ್ಥ 2,500 ವಿಶೇಷ ಅಂಚೆ ಲಕೋಟೆ ತಂದಿದೆ’ ಎಂದರು.