ಪುಣೆ ಪಂದ್ಯದಲ್ಲಿ ಕೊಹ್ಲಿ ಬಳಗ ಯೋಜನಾಬದ್ಧವಾಗಿ ಆಡಿತ್ತು. ಭುವ ನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬೂಮ್ರಾ ಆರಂಭದಲ್ಲೇ ವಿಕೆಟ್ ಕೆಡವಿ ಎದುರಾಳಿ ಬ್ಯಾಟಿಂಗ್ ಶಕ್ತಿಗೆ ಬಲವಾದ ಪೆಟ್ಟು ನೀಡಿದ್ದರು. ಕೊನೆಯ ಓವರ್’ಗಳಲ್ಲೂ ಇವರು ಹೆಚ್ಚು ರನ್ ಬಿಟ್ಟುಕೊಟ್ಟಿರಲಿಲ್ಲ. ಸ್ಪಿನ್ನರ್
ಗಳಾದ ಯಜುವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಕೂಡ ಎದುರಾಳಿ ಬ್ಯಾಟ್ಸ್ಮನ್ಗಳು ರಟ್ಟೆ ಅರಳಿಸದಂತೆ ನೋಡಿಕೊಂಡಿದ್ದರು.