ಪ್ರಕರಣದ ಹಿನ್ನೆಲೆ: ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಂಬಾಬಾಯಿ ಎಸ್. ಅಥಣಿ ಎಂಬುವವರು ಗಾಂಜಾವನ್ನು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇರೆಗೆ 2007 ಜುಲೈ 6 ರಂದು ಕಮರಿಪೇಟೆ ಪೊಲೀಸರು ಅವರನ್ನು ಬಂಧಿಸಿ, ಕರೆದೊಯ್ದರು. ಆ ವೇಳೆ ಡಿ.ಕೆ. ಚವ್ಹಾಣ, ರಂಗಾ ಬದ್ದಿ, ರಾಮು ಬಸವಾ, ಶೋಭಾ ನಾಕೋಡ ಸೇರಿದಂತೆ 19 ಮಂದಿ ಮಹಿಳೆಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ಪೊಲೀಸ್ ವಾಹನ ಅಡ್ಡಗಟ್ಟಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.