ನೆಲಮಂಗಲ: ಭಾರತೀಯ ಕಿಸಾನ್ ಸಂಘ ಪಟ್ಟಣದಲ್ಲಿ ಶುಕ್ರವಾರ 101 ದೇಸಿ ಹಸುಗಳ ಮೆರವಣಿಗೆಯನ್ನು ಆಯೋಜಿಸಿತ್ತು.
ಗೋಪೂಜೆ ಸಲ್ಲಿಸುವ ಮೂಲಕ ಪವಾಡ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ‘ದೇಸಿ ಗೋವುಗಳು ಚಲಿಸುವ ಔಷಧಾಲಯಗಳು. ದೇಶದ ತಳಿಗಳು ಅಳಿವಿನಂಚಿನಲ್ಲಿದ್ದು, ಅವುಗಳ ಸಂರಕ್ಷಣೆಗಾಗಿ ಜನರು ಕೈಜೋಡಿಸಬೇಕು’ ಎಂದರು.
ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ, ರಾಜ್ಯಧ್ಯಕ್ಷ ಯಳಂದೂರು ರಂಗನಾಥ ಮೆರವಣಿಗೆ ಸಂಘಟಿಸಿದ್ದರು.