ಬೆಂಗಳೂರು: ಯಲಹಂಕ ಸಮೀಪದ ಹುಣಸಮಾರನಹಳ್ಳಿಯ ಜಂಗಮ ಮಠದ ಉತ್ತಾರಾಧಿಕಾರಿ ಪದವಿಯಿಂದ ದಯಾನಂದ ಸ್ವಾಮೀಜಿ ಅವರನ್ನು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ವಜಾಗೊಳಿಸಿದರು. ಮಠದ ಬಿಕ್ಕಟ್ಟು ಬಗೆಹರಿಸಲು ಒಂಬತ್ತು ಮಂದಿಯ ಸಮಿತಿ ರಚಿಸಿದ್ದಾರೆ.
ಮಧ್ಯಾಹ್ನ 12ಗಂಟೆ ಸುಮಾರಿಗೆ ಮಠಕ್ಕೆ ಬಂದ ಜಗದ್ಗುರುಗಳು, ವಿವಾದಿತ ಸ್ವಾಮೀಜಿ ದಯಾನಂದ ಅವರ ಸಂಬಂಧಿಕರು ಹಾಗೂ ಟ್ರಸ್ಟಿಗಳ ಜತೆ ಒಂದೂವರೆ ತಾಸು ಚರ್ಚೆ ನಡೆಸಿದರು. ಆ ನಂತರ ಅವರನ್ನು ಉತ್ತರಾಧಿಕಾರಿ ಪಟ್ಟದಿಂದ ಕೆಳಗಿಳಿಸಿರುವ ನಿರ್ಧಾರ ಪ್ರಕಟಿಸಿದರು.
ಪ್ರತಿಭಟನೆ: ದಯಾನಂದ ಸ್ವಾಮೀಜಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆ, ಬಹುಜನ ಸಮಾಜವಾದಿ ಪಕ್ಷ, ಪ್ರಜಾ ವಿಮೋಚನಾ ಚಳವಳಿ ಸಂಘಟನೆಗಳ ಕಾರ್ಯಕರ್ತರು ಮಠದ ಬಳಿ ಪ್ರತಿಭಟನೆ
ಮಾಡಿದ್ದರು.