ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಒಟ್ಟು ಐದು ದಿನಗಳ ಪ್ರವಾಸದಲ್ಲಿ ಚಿತ್ರದುರ್ಗ ಕೋಟೆ, ಮುರುಘಾಮಠ, ಹೊಸಪೇಟೆ ತುಂಗಭದ್ರ ಅಣೆಕಟ್ಟು, ಕೂಡಲ ಸಂಗಮ, ಗೋಲ್ ಗುಂಬಜ್, ಆಲಮಟ್ಟಿ ಅಣೆಕಟ್ಟು ಮತ್ತು ಸಂಗೀತ ಕಾರಂಜಿ, ಐಹೊಳೆ ಪಟ್ಟದಕಲ್ಲು, ಬಾದಾಮಿ, ಮಹಾಕೂಟ, ಗಜೇಂದ್ರಗಡ, ವಾಣಿವಿಲಾಸ ಸಾಗರ ಮಕ್ಕಳಿಗೆ ವೀಕ್ಷಣೆಗೆ ಅವಕಾಸವಿದೆ. ಒಟ್ಟು 1500 ಕಿ.ಮೀ.ಪ್ರವಾಸಕ್ಕೆ ಎರಡು ತಂಡದಲ್ಲಿ ನಾಲ್ಕು ಬಸ್ ನಲ್ಲಿ 194 ವಿದ್ಯಾರ್ಥಿಗಳು ತೆರಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.