ಬೆಂಗಳೂರು: ಅರಮನೆ ಮೈದಾನದಲ್ಲಿ ಸಾವಿರಾರು ಮಂದಿ ಒಕ್ಕೊರಲಿನಿಂದ 'ಸೌಂದರ್ಯಲಹರೀ' ಪಾರಾಯಣ ಆರಂಭಿಸಿದರು. ಎರಡು ಗಂಟೆಗೆ ಆರಂಭವಾದ ಸೌಂದರ್ಯಲಹರೀ ಪಾರಾಯಣ 2:45ಕ್ಕೆ ಸಂಪನ್ನವಾಯಿತು.
ಇದೀಗ 'ದಕ್ಷಿಣಮೂರ್ತ್ಯಷ್ಟಕ'ದ ಪಾರಾಯಣ ಆರಂಭವಾಗಿದೆ. ಆತುರ, ಕಾತರವಿಲ್ಲದ ಮಂತ್ರದ ಅಲೆಗಳು ಇಡೀ ವಾತಾವರಣಕ್ಕೆ ಪ್ರಫುಲ್ಲತೆ ತುಂಬಿದೆ. ತುಂಬುನದಿಯ ಮಂದ ಪ್ರವಾಹದಂತೆ ಮಂತ್ರದ ಅಲೆಗಳು ಸಹಸ್ರಾರು ಕಂಠದಿಂದ ಓತಪ್ರೋತವಾಗಿ ತೇಲಿ ಬರುತ್ತಿವೆ.
ಸಾವಿರಗಟ್ಟಲೆ ಜನರು ಒಂದೇ ಧಾಟಿಯಲ್ಲಿ ಇಂಪಾಗಿ ಹಾಡಿದ್ದು ಸಂಘಟಕರ ಸಾಮರಸ್ಯದ ಆಶಯವನ್ನೂ ಬಿಂಬಿಸುವಂತಿತ್ತು.
ಮಂತ್ರೋಚ್ಚಾರಣೆಯ ನಂತರ ಎರಡು ನಿಮಿಷದ ಮೌನವನ್ನು ಸಾಧಕರು ಆಹ್ವಾನಿಸಿಕೊಂಡರು. ಆ ಮೂಲಕ ವಾತಾವರಣದ ತುಂಬೆಲ್ಲ ಪಸರಿಸಿದ್ದ ಮಂತ್ರಶಕ್ತಿಯ ಅನುಭವವನ್ನು ಪಡೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಣಲು ಸಭೆ ಈಗ ಕಾತರದಿಂದ ಕಾಯುತ್ತಿದೆ.