</p><p>'ನಾನು ಹಲವು ವರ್ಷಗಳಿಂದ ನವರಾತ್ರಿ ವ್ರತ ಆಚರಿಸುತ್ತಿದ್ದೇನೆ. ನಾನು ಹೇಳುವ ದೇವಿಸ್ತುತಿಗಳಲ್ಲಿ<a href="http://www.prajavani.net/news/article/2017/10/29/529534.html" target="_blank"> ಶಂಕರಾಚಾರ್ಯರ ಸೌಂದರ್ಯಲಹರೀ</a>ಯೂ ಸೇರಿದೆ. ಸೌಂದರ್ಯಲಹರೀಯ ಪ್ರತಿ ಮಂತ್ರದಲ್ಲೂ ಮಹತ್ಬದ ಭಾವ ಇದೆ' ಎಂದು ಸ್ತೋತ್ರದ ಮಹತ್ವ ವಿವರಿಸಿದರು.</p><p>'ಸಾವಿರಾರು ಜನರು ಒಂದೇ ಸ್ಥಲದಲ್ಲಿ ಒಕ್ಕೊರಲಿನಿಂದ ಮಂತ್ರ ಹೇಳುವುದರಿಂದ ದೊಡ್ಡಮಟ್ಟದ ಶಕ್ತಿಸಂಚಯವಾಗುತ್ತೆ. ಈಗ ಇಲ್ಲಿ ನೆರೆದಿರುವವರು ಪಾರಾಯಣ ಮಾಡಿರುವುದರಿಂದ ಉಂಟಾಗಿರುವ ಶಕ್ತಿಯ ಅಲೆಗಳ ಅನುಭವ ನನಗೆ ಆಗುತ್ತಿದೆ' ಎಂದರು.</p><p>'ಬಂಧುಗಳೇ, ಸೌಂದರ್ಯಲಹರೀ ಮಹಾ ಸಮರ್ಪಣೆಗೆ ಬಂದಿರುವ ನಿಮಗೆಲ್ಲರಿಗೆ ಪ್ರಣಾಮಗಳು' ಎಂದು ಪ್ರಧಾನಿ ಕನ್ನಡದಲ್ಲಿ ಮಾತು ಆರಂಭಿಸಿದಾಗ ಸಭಿಕರು ಹರ್ಷೋದ್ಗಾರ ಮಾಡಿದರು. 'ಭಜಗುರು ಶರಣಂ, ಭವಭಯ ಹರಣಂ' ಸೇರಿದಂತೆ ಹಲವು ಅದ್ವೈತಪರ ಘೋಷಣೆಗಳೊಂದಿಗೆ ಪ್ರಧಾನಿಯನ್ನು ಸಾಧಕರು ಸ್ವಾಗತಿಸಿದರು.</p><p><iframe allowfullscreen="" frameborder="0" height="315" src="https://www.youtube.com/embed/i41hEiKetiA" width="560"/></p></p>