ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅರ್ಚನಾಗೆ ಪ್ರಶಸ್ತಿ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಅರ್ಚನಾ ಕಾಮತ್‌, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಪೂರ್ವ ವಲಯದ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಶುಕ್ರವಾರ ನಡೆದ 18 ವರ್ಷದೊಳಗಿನವರ ಜೂನಿಯರ್‌ ಬಾಲಕಿಯರ ಫೈನಲ್‌ನಲ್ಲಿ ಅರ್ಚನಾ 12–10, 11–6, 12–10, 11–8ರಲ್ಲಿ ಸೆಲೆನಾ ದೀಪ್ತಿ ಸೆಲ್ವಕುಮಾರ್‌ ಅವರನ್ನು ಸೋಲಿಸಿದರು.

ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ತಂಡವನ್ನು ಪ್ರತಿನಿಧಿಸಿದ್ದ ಅರ್ಚನಾ ನಾಲ್ಕೂ ಗೇಮ್‌ಗಳಲ್ಲೂ ಮಿಂಚಿನ ಸಾಮರ್ಥ್ಯ ತೋರಿ ಎದುರಾಳಿಯ ಸವಾಲು ಮೀರಿದರು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರಿನ ಅರ್ಚನಾ 11–8, 11–9, 11–8, 9–11, 13–11ರಲ್ಲಿ ದೆಹಲಿಯ ಇಶಿತಾ ಗುಪ್ತಾ ಎದುರು ಗೆದ್ದಿದ್ದರು.

ಮತ್ತೊಂದು ಹೋರಾಟದಲ್ಲಿ 11–8, 11–9, 12–10, 12–10ರಲ್ಲಿ ಮಹಾರಾಷ್ಟ್ರದ ಸೃಷ್ಟಿ ಹಳೆಂಗಡಿಗೆ ಸೋಲಿನ ರುಚಿ ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT