'ವೇದಾಂತ ಭಾರತಿಯ ಜತೆಗೆ ಸಾವಿರಾರು ಸ್ವಯಂಸೇವಕರು ಗೌರವಧನ–ವೇತನ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಅಂಥವರ ಪೈಕಿ ನಾನೂ ಒಬ್ಬ. ನಾವು ಶಾಲೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರನ್ನು ಸಂಪರ್ಕಿಸುತ್ತೇವೆ. ಪ್ರಾರ್ಥನೆಯ ಅವಧಿಯ ನಂತರ 10 ನಿಮಿಷ ಅಥವಾ ನೈತಿಕ ಶಿಕ್ಷಣದ ಅವಧಿಯಲ್ಲಿ 10 ನಿಮಿಷವನ್ನು ನಮಗೆ ಬಿಟ್ಟುಕೊಡುವಂತೆ ಕೋರುತ್ತೇವೆ. ಈವರೆಗೆ ಯಾರೂ ನಮ್ಮ ಕೋರಿಕೆ ನಿರಾಕರಿಸಿಲ್ಲ' ಎಂದು ಹೆಮ್ಮೆಯಿಂದ ಹೇಳಿದರು.