‘ಮನುಷ್ಯ ದುಃಖದಿಂದ ಪಾರಾಗಲು ಇರುವ ದಾರಿಗಳ ಕುರಿತು ಉಪನಿಷತ್ಗಳಲ್ಲಿ ವಿಷದವಾಗಿ ವಿವರಿಸಲಾಗಿದೆ. ನಮ್ಮ ಎಲ್ಲ ಸ್ಥಿತಿಗಳಿಗೆ ಮನಸ್ಸೇ ಕಾರಣ. ಮನೋನಿಗ್ರಹ ಸಾಧಿಸಿದರೆ ಶಾಂತಿ, ಜ್ಞಾನ ಪ್ರಾಪ್ತಿಯಾಗುತ್ತದೆ. ಅದರಿಂದ ಆನಂದ ಉಂಟಾಗುತ್ತದೆ. ಸೌಂದರ್ಯಲಹರೀ ಪಾರಾಯಣದಿಂದ ಮನೋನಿಗ್ರಹ ಸಾಧಿಸಲು ಸಾಧ್ಯವಿದೆ. ಇದು ಶಂಕರರು ಮನುಕುಲಕ್ಕೆ ಕೊಟ್ಟ ಅನನ್ಯ ಕೊಡುಗೆ’ ಎಂದು ಅವರು ಹೇಳಿದರು.