ತೆಲಸಂಗ: ತೆಲಸಂಗ ಹೋಬಳಿಯಲ್ಲಿ ದ್ರಾಕ್ಷಿ ಬೆಳೆಗೆ ದವಣ್ಯಾ ಮತ್ತು ಕೊಳೆ ರೋಗ ತಗುಲಿದ್ದು, ಈ ಬಗ್ಗೆ ತಹಶೀಲ್ದಾರರಿಗೆ ವರದಿ ನೀಡುವುದಾಗಿ ತೋಟಗಾರಿಗೆ ಅಧಿಕಾರಿ ಅಶ್ವಿನಿ ಹೇಳಿದರು. ಸಮೀಪದ ಕಕಮರಿ ಗ್ರಾಮದ ಅಶೋಕ ಶಿರಗುಪ್ಪಿ ಅವರ ದ್ರಾಕ್ಷಿ ತೋಟಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಹೋಬಳಿಯಲ್ಲಿ ನೂರಾರು ಎಕರೆಗಳಲ್ಲಿ ಈ ರೋಗ ಬಾಧೆ ಕಂಡುಬಂದಿದ್ದು, ದ್ರಾಕ್ಷಿ ಕಾಯಿಗಳ ಗೊಂಚಲು ಕತ್ತರಿಸಿ ನೆಲಕ್ಕೆ ಬೀಳುತ್ತಿವೆ, ಎಲ್ಲ ಕಡೆ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದರು.