‘ದೇವಾಂಗ ಸಮುದಾಯ ಭವನದಿಂದ ಬದಾಮಿ ಮುಖ್ಯರಸ್ತೆ ಸಂಪರ್ಕ ಹೊಂದುವ ಮಧ್ಯದಲ್ಲಿ ದೊಡ್ಡ ಪ್ರಮಾಣದ ಮೂರು ಕಾಲುವೆಗಳಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಕಿರು ಸೇತುವೆಗಳನ್ನು, ಇಲ್ಲವೆ ಕೊಳವೆಗಳನ್ನು ಅಳವಡಿಸಿ’ ಎಂದು ಶಂಕರ ಸಿನ್ನೂರ, ರಾಘವೇಂದ್ರ, ಮಂಜುನಾಥ ಶಿಂಹಾಸನ, ಬಸವರಾಜ ನೀಲಗಾರ, ಬಸವರಾಜ ಸಿನ್ನೂರ ಆಗ್ರಹಿಸಿದರು. ಮುಖಂಡ ಸುರೇಶ ಸಿನ್ನೂರ ಇದ್ದರು.