ಪಿರಿಯಾಪಟ್ಟಣ: ಬಿಜೆಪಿ ತೊರೆದ ಸಿ.ಎಚ್.ವಿಜಯಶಂಕರ್ ಪಕ್ಷ ಬಿಡಲು ನೆಪವಾಗಿ ವಿನಾ ಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಮಂಜುನಾಥ್ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಪಕ್ಷದ ಮತ್ತೊಂದು ಕಚೇರಿ ಸ್ಥಾಪಿಸಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ವಿಜಯಶಂಕರ್ ಆರೋಪಿಸಿದ್ದರು.
ಆದರೆ, ನನ್ನ ಅಭಿಮಾನಿ ಬಳಗದ ಸ್ವಂತ ಕಚೇರಿ ಹೊಂದಿ ಅಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಹಾಕಲಾಗಿತ್ತು ಎಂದು ಹೇಳಿದರು. ಬಿಜೆಪಿ ಬಲವರ್ಧನೆಗೆ ವರಿಷ್ಠರು ಸೂಚಿಸಿರುವ ಮೇರೆಗೆ ತಾಲ್ಲೂಕಿನಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು.