ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಕಲುಷಿತ ನೀರು ರಸ್ತೆಯ ಮಧ್ಯದಲ್ಲಿ ಹರಿದು ದುರ್ವಾಸನೆ ಬೀರುತ್ತಿದೆ. ಕೂಗಳತೆ ದೂರದಲ್ಲಿ ಶಾಲಾ, ಕಾಲೇಜು ಇದ್ದು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಗುಂಡಿಯಲ್ಲಿ ಕಲುಷಿತ ನೀರು ನಿಂತಿದ್ದು ಸೊಳ್ಳೆಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಡೆಂಗಿ, ಚಿಕೂನ್ ಗುನ್ಯಾ ಭೀತಿಯೂ ಜನರಲ್ಲಿ ಎದುರಾಗಿದೆ.