ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ತೀರದಲ್ಲಿ ರೌಡಿಶೀಟರ್–ಪೊಲೀಸರ ಗುಂಡಿನ ಕಾಳಗ

ರೌಡಿಶೀಟರ್ ಧರ್ಮರಾಜ ಸಾವು * ಪಿಎಸ್‌ಐ ಗೋಪಾಲ ಹಳ್ಳೂರಗೆ ಗಾಯ
Last Updated 30 ಅಕ್ಟೋಬರ್ 2017, 16:14 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದ ಗಡಿ ಗ್ರಾಮ ಕೊಂಕಣಗಾಂವ್‌ನಲ್ಲಿ ಸೋಮವಾರ ಮುಂಜಾನೆ ಪೊಲೀಸರು–ರೌಡಿಶೀಟರ್‌ಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ, ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣ ಮೃತಪಟ್ಟಿದ್ದು, ಈತನ ಸಹಚರ ಶಿವಾನಂದ ಶ್ರೀಶೈಲ ಬಿರಾದಾರ, ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಗೋಪಾಲ ಹಳ್ಳೂರ ಗಾಯಗೊಂಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಧರ್ಮರಾಜ ಚಡಚಣ ದೇಹಕ್ಕೆ ಎಂಟು ಗುಂಡು ಹೊಕ್ಕಿವೆ. ಸಹಚರ ಶಿವಾನಂದನಿಗೆ ಎರಡು, ಪಿಎಸ್‌ಐಗೆ ಒಂದು ಗುಂಡು ತಗುಲಿದೆ ಎಂದು ಜಿಲ್ಲಾ ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

‘ಗಂಭೀರವಾಗಿ ಗಾಯಗೊಂಡಿದ್ದ ಧರ್ಮರಾಜನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಯತ್ನಿಸಿದೆವು. ಆದರೆ ಎದೆಗೆ ಮೂರು, ಬೆನ್ನಿಗೆ ಮೂರು, ಬಲಗೈ–ಬಲ ಕಾಲಿಗೆ ತಲಾ ಒಂದೊಂದು ಗುಂಡು ಹೊಕ್ಕಿದ್ದರಿಂದ, ತೀವ್ರ ಅಸ್ವಸ್ಥಗೊಂಡ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಅಧೀಕ್ಷಕ ವಿಜಯಕುಮಾರ ಕಲ್ಯಾಣಪ್ಪಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

</p><p>‘ಶಿವಾನಂದನ ಎಡಗೈ ಮೊಳಕೈಗೆ ಎರಡು ಗುಂಡು ಹೊಕ್ಕಿವೆ. ಪಿಎಸ್‌ಐ ಗೋಪಾಲ ಹಳ್ಳೂರ ಬಲ ಭುಜಕ್ಕೆ ಗುಂಡು ಹೊಕ್ಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.</p><p><strong>ಅಕ್ರಮ ಶಸ್ತ್ರಾಸ್ತ್ರ:</strong><br/>&#13; ‘ರೌಡಿ ಶೀಟರ್ ಧರ್ಮರಾಜ ಚಡಚಣ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಎಂಬ ಖಚಿತ ಮಾಹಿತಿ ದೊರೆತಿತ್ತು. ತಪಾಸಣೆಗೆ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನೇತೃತ್ವದ ತಂಡ ಕೊಂಕಣಗಾಂವ್‌ಗೆ ಸೋಮವಾರ ನಸುಕಿನಲ್ಲೇ ತೆರಳಿತ್ತು.</p><p>ಈ ಸಂದರ್ಭ ಧರ್ಮರಾಜ ಪೊಲೀಸರ ಜತೆ ವಾಗ್ವಾದ ನಡೆಸಿದ್ದಾನೆ. ಪಿಎಸ್‌ಐ ತಪಾಸಣೆಗೆ ಮುಂದಾಗುತ್ತಿದ್ದಂತೆ ಸಹಚರರ ಜತೆ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ, ಗಂಭೀರ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್‌ ತಿಳಿಸಿದರು.</p><p>‘ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಪಿಎಸ್‌ಐ ಸರ್ವೀಸ್‌ ರಿವಾಲ್ವರ್ ಸೇರಿದಂತೆ ರೌಡಿ ಶೀಟರ್‌ಗಳು ಬಳಸಿದ ಐದು ನಾಡ ಪಿಸ್ತೂಲ್, ಎರಡು ಲಾಂಗ್ ರೇಜ್‌ನ ಆಯುಧ ಲಭ್ಯವಾಗಿವೆ’ ಎಂದು ಹೇಳಿದರು.</p><p><img alt="" src="https://cms.prajavani.net/sites/pv/files/article_images/2017/10/30/Dharma.jpg" style="width: 600px; height: 619px;" data-original="/http://www.prajavani.net//sites/default/files/images/Dharma.jpg"/></p><p><em>(ಧರ್ಮರಾಜ ಚಡಚಣ)</em></p><p><strong>ಭೀಮಾ ತೀರದ ಕುಖ್ಯಾತ ರೌಡಿಶೀಟರ್:</strong></p><p>2014ರಲ್ಲಿ ವಿಜಯಪುರ ನಗರದಲ್ಲಿ ನಡೆದ ಇಲ್ಲಿನ ಮಹಾನಗರ ಪಾಲಿಕೆಯ ಮೊದಲ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್ ಸಹೋದರನ ಪುತ್ರ ಫಯಾಜ್ ಮುಶ್ರೀಫ್ ಕೊಲೆ ಪ್ರಕರಣದಲ್ಲಿ ಧರ್ಮರಾಜ ಮೊದಲ ಆರೋಪಿ ಆಗಿದ್ದ.</p><p>ಧರ್ಮರಾಜ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಡಿಸೆಂಬರ್‌ನಲ್ಲಿ ಪುಣೆಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ. ದರ್ಗಾ ಜೈಲಿನಲ್ಲಿದ್ದುಕೊಂಡೇ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪವೂ ಈತನ ಮೇಲಿತ್ತು. ಕೊಲೆ ಪ್ರಕರಣ ವಿಚಾರಣೆಗೆ ವಿಜಯಪುರ ನ್ಯಾಯಾಲಯಕ್ಕೆ ಸಶಸ್ತ್ರ ಸಮೇತ ಹಾಜರಾಗಿ, ಪೊಲೀಸರಿಂದ ಕಠಿಣ ಎಚ್ಚರಿಕೆಯನ್ನು ಪಡೆದಿದ್ದ.</p><p><img alt="" src="https://cms.prajavani.net/sites/pv/files/article_images/2017/10/30/30bjr2%20Dharma(1).JPG" style="width: 600px; height: 374px;" data-original="/http://www.prajavani.net//sites/default/files/images/30bjr2%20Dharma(1).JPG"/></p><p><em>(ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ರೌಡಿ ಶೀಟರ್ ಧರ್ಮರಾಜ ಚಡಚಣ, ಗಾಯಗೊಂಡ ಈತನ ಸಹಚರ ಶಿವಾನಂದ ಶ್ರೀಶೈಲ ಬಿರಾದಾರ, ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಚಿಕಿತ್ಸೆಗಾಗಿ ದಾಖಲಾಗಿದ್ದ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಆಸ್ಪತ್ರೆಗೆ ಸೋಮವಾರ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದರು)</em></p><p><strong>ಕುಟುಂಬ ವೈಷಮ್ಯದ ಕಿಡಿ:</strong><br/>&#13; ‘ಎರಡು ತಲೆಮಾರುಗಳಿಂದ ಪುತ್ರಪ್ಪ ಭೈರಗೊಂಡ–ಮಲ್ಲಿಕಾರ್ಜುನ ಚಡಚಣ(ಧರ್ಮರಾಜ ಚಡಚಟ ತಂದೆ) ಕುಟುಂಬಗಳ ನಡುವೆ ಆಸ್ತಿಗಾಗಿ ತಿಕ್ಕಾಟ ನಡೆಯುತ್ತಿದೆ. ಈ ವೈಷಮ್ಯದ ಕಿಡಿಯಾಗಿ ಚಡಚಣ ಕುಟುಂಬದಿಂದ ಅಪರಾಧ ಜಗತ್ತು ಪ್ರವೇಶಿಸಿದವ ಧರ್ಮರಾಜ ಚಡಚಣ. ಈ ಎರಡೂ ಕುಟುಂಬಗಳ ನಡುವಿನ ಜಗಳದಲ್ಲಿ ಇದುವರೆಗೆ ಹಲವರು ಬಲಿಯಾಗಿದ್ದಾರೆ.</p><p>ಪುತ್ರಪ್ಪ ಭೈರಗೊಂಡ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ತಾರಕಕ್ಕೇರುತ್ತದೆ. ಪುತ್ರಪ್ಪ ಮಲ್ಲಿಕಾರ್ಜುನ ಚಡಚಣನ ತಂದೆ, ಸಹೋದರನ ಹತ್ಯೆ ಮಾಡಿಸುತ್ತಾರೆ. ಇದಕ್ಕೆ ಪ್ರತೀಕಾರವಾಗಿ ಮಲ್ಲಿಕಾರ್ಜುನ ಸಹ ಪುತ್ರಪ್ಪನ ತಂದೆ, ಸಹೋದರನನ್ನು ಹತ್ಯೆಗೈಯುತ್ತಾರೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p><p>‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಪೊಲೀಸರು ಮಲ್ಲಿಕಾರ್ಜುನ ಚಡಚಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಪುತ್ರಪ್ಪನ ಬೆಂಬಲಿಗರು ಮಲ್ಲಿಕಾರ್ಜುನ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಳ್ಳುವ ಮಲ್ಲಿಕಾರ್ಜುನ, ನಂತರ ನಡೆದ ವಿದ್ಯಮಾನದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು, ಘೋಷಿತ ಅಪರಾಧಿಯಾಗಿದ್ದಾನೆ.</p><p>ತಂದೆಯ ಮೇಲೆ ನಡೆದ ದಾಳಿಯ ಪ್ರತೀಕಾರ ತೀರಿಸಿಕೊಳ್ಳಲು ಅಪರಾಧ ಜಗತ್ತು ಪ್ರವೇಶಿಸುವ ಧರ್ಮರಾಜ ಚಡಚಣ 2008ರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಶಾಸಕ ಪ್ರೊ.ರಾಜು ಆಲಗೂರ ಪರ ಪ್ರಚಾರ ನಡೆಸುತ್ತಿದ್ದ ಪುತ್ರಪ್ಪನ ಬೆನ್ನಿಗೆ ಗುಂಡು ಹಾರಿಸಿದ.</p><p>ಈ ಘಟನೆ ಬಳಿಕ ಅಪರಾಧ ಜಗತ್ತಿನಲ್ಲಿ ಧರ್ಮನ ಹೆಸರು ರಾರಾಜಿಸುತ್ತದೆ. ಗಂಭೀರ ಗಾಯಗೊಂಡ ಪುತ್ರಪ್ಪ 2010ರಲ್ಲಿ ಮೃತಪಡುತ್ತಾನೆ. ಎರಡೂ ಕುಟುಂಬಗಳ ನಡುವಿನ ಜಗಳ ಮುಂದುವರೆದಿದೆ. ಆಸ್ತಿಗಾಗಿ ಆರಂಭಗೊಂಡಿದ್ದ ಕಿತ್ತಾಟ ಇದೀಗ ಮರಳು ಮಾಫಿಯಾ ಮೇಲಿನ ಹಿಡಿತಕ್ಕೂ ವಿಸ್ತರಿಸಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p><p><iframe allowfullscreen="" frameborder="0" height="315" src="https://www.youtube.com/embed/LeQuyt1TZH4" width="560"/></p><p><strong>ರಾಜಕಾರಣದ ನಂಟು:</strong><br/>&#13; ಪುತ್ರಪ್ಪ ಭೈರಗೊಂಡ, ಈತನ ಸಹೋದರ ಮಹಾದೇವ ಭೈರಗೊಂಡ ಕಾಂಗ್ರೆಸ್‌ ಪಕ್ಷದ ಜತೆ, ಜಿಲ್ಲೆಯ ಪ್ರಭಾವಿ ನೇತಾರರ ಸಂಗಡ ಆಪ್ತ ನಂಟು ಹೊಂದಿದ್ದರೆ, ಧರ್ಮರಾಜ ಚಡಚಣ ಬಿಜೆಪಿ ಮುಖಂಡರ ಸಖ್ಯ ಹೊಂದಿದ್ದ. ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಉತ್ಸುಕನಾಗಿದ್ದ ಎಂಬುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ.</p><p><br/>&#13; * ಖಚಿತ ಮಾಹಿತಿ ಮೇರೆಗೆ ಚಡಚಣ ಪಿಎಸ್‌ಐ ದಾಳಿ ನಡೆಸಿದ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಧರ್ಮರಾಜ ಚಡಚಣ ಮೃತಪಟ್ಟಿದ್ದಾನೆ<br/>&#13; <em><strong>–ಕುಲದೀಪ್‌ ಕುಮಾರ್ ಆರ್‌.ಜೈನ್‌, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</strong></em></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT