ಅ.30ರಂದು ಪ್ರಕಟಗೊಂಡ ‘ಇಂಗ್ಲಿಷಿಗೆ ಗದಾಯುದ್ಧ, ವಡ್ಡಾರಾಧನೆ’ ವರದಿಗೆ ಸಂಬಂಧಿಸಿದಂತೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಎರಡೂ ಕೃತಿಗಳ ಅನುವಾದವನ್ನು ಗಿಲ್ ಬೆನ್ ಹೆರುತ್ ಜೊತೆ ಮಾಡುತ್ತಿಲ್ಲ. ಅವರೊಂದಿಗೆ ‘ಉದಯಾದಿತ್ಯ ಅಲಂಕಾರ’ ಕೃತಿಯನ್ನು ಅನುವಾದಿಸಿದ್ದೇನೆ. ಈಗ ಅವರೊಂದಿಗೆ ಹರಿಹರನ ರಗಳೆಗಳ ಅನುವಾದ ನಡೆಯುತ್ತಿದೆ. ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ನನ್ನ ಸಹೋದ್ಯೋಗಿ ಗಿಲ್ ಅಲ್ಲ; ದೇವೇನ್ ಪಟೇಲ್. ಅವರೊಂದಿಗೆ ಇಂಗ್ಲಿಷ್ ಅನುವಾದ ಮಾಡಿದ್ದು ‘ಕವಿರಾಜಮಾರ್ಗ’ ಕೃತಿ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.