ಲಖನೌ: ತಾಜ್ಮಹಲ್ ಜತೆಗೆ ಕೇಸರಿ ಧ್ವಜಗಳನ್ನು ಸೇರಿಸಿ ವಿರೂಪಗೊಳಿಸಿರುವ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಹಾಕಿದ್ದಕ್ಕಾಗಿ ರಾಷ್ಟ್ರ ನಿರ್ಮಾಣ ಸೇನಾ ಪಕ್ಷದ ಅಧ್ಯಕ್ಷ ಅಮಿತ್ ಜಾನಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 3ರಂದು ತಾಜ್ಮಹಲ್ನಲ್ಲಿ ಶಿವನ ಪೂಜೆ ಮಾಡಲು ಬರುವಂತೆ ಕಾರ್ಯಕರ್ತರಿಗೆ ಜಾನಿ ಕರೆ ನೀಡಿದ್ದರು. ಇದಾದ ಬಳಿಕ ಅವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು.
ಆಗ್ರಾದ ಮಾಲ್ ಅವೆನ್ಯುದಲ್ಲಿ ಜಾನಿ ಹಾಗೂ ಅವರ ಸ್ನೇಹಿತರನ್ನು ಬಂಧಿಸಲಾಗಿದೆ.