ಬೆಂಗಳೂರು: ಸಾಹಿತ್ಯಾಸಕ್ತರ ವೇದಿಕೆ ‘ಈ ಹೊತ್ತಿಗೆ’ಯು ಸಾಹಿತ್ಯ ಪ್ರಿಯರಿಗಾಗಿ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.
ಎಲ್ಲಾ ವಯೋಮಾನದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಂದು ಎರಡು ವಿಭಾಗಗಳಾಗಿ ಸ್ಪರ್ಧೆ ನಡೆಸಲಾಗುತ್ತಿದೆ. ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ತೃತೀಯ ಬಹುಮಾನವಾಗಿ ಕ್ರಮವಾಗಿ ₹ 5 ಸಾವಿರ, ₹ 3 ಸಾವಿರ ಹಾಗೂ ₹ 2 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸಾಹಿತ್ಯಾಸಕ್ತರ ವೇದಿಕೆ ತಿಳಿಸಿದೆ.
ಸ್ಪರ್ಧೆಯ ನಿಯಮಗಳು
* ಒಬ್ಬರಿಗೆ ಎರಡೂ ವಿಭಾಗದಲ್ಲಿ ಭಾಗವಹಿಸಲು ಅವಕಾಶವಿಲ್ಲ.
* ಸ್ಪರ್ಧಿಗಳು ಕಳುಹಿಸುವ ಕಥೆಗಳು ಸ್ವ–ರಚಿತ, ಸ್ವತಂತ್ರ ಹಾಗೂ ಅಪ್ರಕಟಿತವಾಗಿರಬೇಕು.
* 1600 ಪದಗಳನ್ನು ಮೀರಿರಬಾರದು.
* ಇ– ಮೇಲ್ ಮೂಲಕ ಕಥೆ ಕಳಿಸುವವರು ಯುನಿಕೋಡ್ / ನುಡಿ / ಬರಹ ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಬೇಕು.
* ಹಸ್ತಪ್ರತಿ ಮೂಲಕ ಕಳುಹಿಸುವವರು ಹಾಳೆಯ ಒಂದು ಮಗ್ಗುಲಿನಲ್ಲಿ ಮಾತ್ರ ಕಥೆ ಬರೆದು ಕಳುಹಿಸಬೇಕು.
* ಕಥೆಯ ಜತೆ ಕಥೆಗಾರರ ಹೆಸರಿರುವಂತಿಲ್ಲ. ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಥೆಯ ಜತೆ ಸೇರಿಸಿ ಕಳುಹಿಸಬೇಕು.
* ವಿದ್ಯಾರ್ಥಿ ವಿಭಾಗದಲ್ಲಿ ಕಥೆ ಬರೆಯುವವರು ಕಾಲೇಜಿನ ದೃಢೀಕರಣ ಪತ್ರದೊಡನೆ ಕಥೆ ಕಳುಹಿಸಬೇಕು.
* 2018ರ ಜನವರಿ ತಿಂಗಳ ಕೊನೆಯ ವಾರದಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು.