‘ಅಫಜಲಪುರದಲ್ಲಿ ನಡೆದ ಸಭೆ ಒಂದು ಸಮುದಾಯದ ಸಭೆ ಆಗಿರಲಿಲ್ಲ, ಜೆಡಿಎಸ್ ಸಭೆಯಂತಾಗಿತ್ತು. ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಜೆಡಿಎಸ್ ಟಿಕೆಟ್ ಆಕಾಂಕ್ಷಿ ಶಿವಕುಮಾರ ನಾಟೀಕರ್ ಅಲ್ಲಿದ್ದರು. ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡು ಈ ಬಾರಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರೆ ಏನು ಅರ್ಥ. ಈ ಮಾತು ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.