‘1994ರಿಂದ ಬಗರ್ ಹುಕುಂ ಸಮಿತಿಯು ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ. ವಾರ್ಷಿಕ ಆದಾಯ ₹ 8,000ಕ್ಕಿಂತ ಕಡಿಮೆ ಇರಬೇಕು, ಮಹಾನಗರ ಪಾಲಿಕೆ ಸರಹದ್ದಿಗೆ 18 ಕಿಲೋ ಮೀಟರ್ ವ್ಯಾಪ್ತಿಯ ಅಂತರ ಇರಬೇಕು, ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆ ಮೀರಬಾರದು ಎಂಬ ಷರತ್ತುಗಳಿವೆ. ಆದರೆ, ಸಮಿತಿ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಿರಿವಂತರಿಗೆ ಭೂಮಿ ಮಂಜೂರು ಮಾಡಿದೆ’ ಎಂದು ದೂರಿದ್ದಾರೆ.