ಬೆಂಗಳೂರು: ಬೆಂಗಳೂರು ರೌಂಡ್ ಟೇಬಲ್ 7, ಬೆಂಗಳೂರು ಲೇಡಿಸ್ ಸರ್ಕಲ್ 19 ಹಾಗೂ ರೌಂಡ್ ಟೇಬಲ್ ಇಂಡಿಯಾ ಫೌಂಡೇಷನ್ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 37ನೇ ವಾರ್ಷಿಕ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚಿನ ಜನರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು.
‘ಕೃತಕ ಕಾಲು ಜೋಡಣೆಗೆ ನೆರವಾಗುವ ಉದ್ದೇಶದಿಂದ ಹೆಲ್ಪ್ ಸಮ್ಒನ್ ವಾಕ್ ಎಂಬ ಅಭಿಯಾನವನ್ನು ಆರಂಭಿಸಿದ್ದೆವು. ಈ ವರ್ಷ ₹5 ಲಕ್ಷ ದೇಣಿಗೆ ಸಂಗ್ರಹಿಸಿದ್ದೇವೆ. ಈ ಹಣದಲ್ಲಿ ಖರೀದಿಸಿದ ಕೃತಕ ಕಾಲುಗಳನ್ನು ಮಹಾವೀರ್ ಜೈನ್ ಆಸ್ಪತ್ರೆಗೆ ಹಸ್ತಾಂತರಿಸಿದ್ದೇವೆ’ ಎಂದು ರೌಂಡ್ ಟೇಬಲ್ 7ರ ಅಧ್ಯಕ್ಷ ನಿತಿನ್ ಬನ್ಸಾಲ್ ತಿಳಿಸಿದರು.
‘ಕಾಲು ಕಳೆದುಕೊಂಡಿರುವವರು ಕೃತಕ ಕಾಲುಗಳಿಂದಾಗಿ ಓಡಾಡಲು ಸಾಧ್ಯವಾಗಿದೆ. ಅವರ ಗೌರವಯುತ ಜೀವನಕ್ಕೆ ಇದು ಸಹಕಾರಿ’ ಎಂದು ಲೇಡಿಸ್ ಸರ್ಕಲ್ 19ರ ಅಧ್ಯಕ್ಷೆ ಜ್ಯೋತಿ ಬನ್ಸಾಲ್ ಹೇಳಿದರು.