ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲೆಳೆದುಕೊಂಡ ಸೋಲು

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಶತಾಯ- ಗತಾಯ ಟಿಪ್ಪು ಜಯಂತಿಯನ್ನು ಆಚರಿಸಿಯೇ ತೀರುವ ಹುಚ್ಚಾಟದಲ್ಲಿ ಸರ್ಕಾರ ಗೆದ್ದಂತೆ ಭಾವಿಸಿರಬಹುದು. ಆದರೆ ಯಥಾರ್ಥವಾಗಿ ಇದೊಂದು ಸೋತ ಯುದ್ಧವೇ ಸರಿ! ಈ ಆಚರಣೆಯಿಂದ ಸಮಾಜದ ಯಾವುದೇ ವರ್ಗಕ್ಕೂ ಯಾವ ಐಹಿಕ ಪ್ರಯೋಜನವೂ ಆದಂತಿಲ್ಲ.

ಮೈಸೂರಿನ ಒಬ್ಬ ಹಳೆ ಸುಲ್ತಾನನ ಆಡಳಿತ ತಾರಕವಾಗಿತ್ತೋ, ಮಾರಕವಾಗಿತ್ತೋ ಎನ್ನುವ ಪ್ರಶ್ನೆ ಇಲ್ಲಿಲ್ಲ. ಹಟದ ಈ ಆಚರಣೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಕೊರತೆಯನ್ನಂತೂ ತೋರಿಸುವಂತಿದೆ. ಟಿಪ್ಪು ಜಯಂತಿಯಿಂದಾಗಿ ಪಕ್ಷಕ್ಕೆ ಒಂದಿಷ್ಟು ಮತಗಳು ಹೆಚ್ಚಾಗಿ ಬರಬಹುದು. ಆದರೆ ಅಷ್ಟೇ ಪ್ರಮಾಣದ ಮತಗಳನ್ನು ಕಳೆದುಕೊಳ್ಳುವ ಸಂಭವವೂ ಇಲ್ಲದಿಲ್ಲ!

ಈ ಮತಗಳೆಲ್ಲಾ ನೇರವಾಗಿ ಬಿಜೆಪಿಗೇ ಹೋಗುತ್ತವೆಂದಲ್ಲ; ಕೆಲವು ಜೆಡಿಎಸ್‍ಗೂ ಜಾರಬಹುದು. ಆದರೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಗೇ ಒದಗಿಬರಬಹುದು. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಸದನದಲ್ಲಿ ಇದು ಪ್ರಜಾಸತ್ತೆಗೆ ದುಪ್ಪಟ್ಟು ಹಾನಿಯನ್ನೇ ತಂದೀತು. ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಟಸ್ಥವಾಗಿರುತ್ತಿದ್ದರೆ, ಯಥಾಸ್ಥಿಯನ್ನಾದರೂ ಉಳಿಸಿಕೊಳ್ಳುವ ಸಾಧ್ಯತೆ ಇರುತ್ತಿತ್ತು. ಮುಂದಿನ ವಿಧಾನಸಭೆ ಅತಂತ್ರವಾದರೆ, ಆ ದುರಿತಕ್ಕೆ ಈಗಿನ ಮುಖ್ಯಮಂತ್ರಿ ನೇರ ಹೊಣೆಗಾರರಾಗುತ್ತಾರೆ!

ಆರ್.ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT