ಈ ಮತಗಳೆಲ್ಲಾ ನೇರವಾಗಿ ಬಿಜೆಪಿಗೇ ಹೋಗುತ್ತವೆಂದಲ್ಲ; ಕೆಲವು ಜೆಡಿಎಸ್ಗೂ ಜಾರಬಹುದು. ಆದರೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಗೇ ಒದಗಿಬರಬಹುದು. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಸದನದಲ್ಲಿ ಇದು ಪ್ರಜಾಸತ್ತೆಗೆ ದುಪ್ಪಟ್ಟು ಹಾನಿಯನ್ನೇ ತಂದೀತು. ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಟಸ್ಥವಾಗಿರುತ್ತಿದ್ದರೆ, ಯಥಾಸ್ಥಿಯನ್ನಾದರೂ ಉಳಿಸಿಕೊಳ್ಳುವ ಸಾಧ್ಯತೆ ಇರುತ್ತಿತ್ತು. ಮುಂದಿನ ವಿಧಾನಸಭೆ ಅತಂತ್ರವಾದರೆ, ಆ ದುರಿತಕ್ಕೆ ಈಗಿನ ಮುಖ್ಯಮಂತ್ರಿ ನೇರ ಹೊಣೆಗಾರರಾಗುತ್ತಾರೆ!