ಕೇಂದ್ರದ ನಿರ್ಧಾರ: 1956 ರಲ್ಲಿ ರಾಜ್ಯಗಳ ಮರುವಿಂಗಡಣೆ ಮಾಡಿದಾಗ, ಕಾಸರಗೋಡನ್ನು ಮೈಸೂರಿಗೂ, ಗುಡಲೂರನ್ನು ಕೇರಳಕ್ಕೂ ಸೇರಿಸಬೇಕೆಂದು ಕೇಂದ್ರ ಸಂಪುಟವು ನಿರ್ಧರಿಸಿತ್ತೆಂದು ಗೊತ್ತಾಗಿದೆ. ಆಗ ಮದ್ರಾಸಿನ ಮುಖ್ಯಮಂತ್ರಿಯಾಗಿದ್ದ ಶ್ರೀ ಕೆ. ಕಾಮರಾಜರು, ನೀಲಗಿರಿ ಜಿಲ್ಲೆಯ ಗುಡಲೂರನ್ನು ಕೇರಳಕ್ಕೆ ಸೇರಿಸಿದರೆ ತಾವು ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದರಂತೆ.