ಅಯೋಧ್ಯೆ ವಿವಾದಗ್ರಸ್ತ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದ ಹಶೀಮ್ ಅನ್ಸಾರಿ ಅವರ ಮಗ ಇಕ್ಬಾಲ್ ಅನ್ಸಾರಿ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಸಂಧಾನದ ಮೂಲಕ ವಿವಾದಕ್ಕೆ ಇತ್ಯರ್ಥ ಯತ್ನಕ್ಕೆ ಅಗತ್ಯವಾದ ಎಲ್ಲ ಸಹಾಯ, ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ರಿಜ್ವಿ ತಿಳಿಸಿದ್ದಾರೆ.