ಇಂಫಾಲ: ಮಣಿಪುರದ ಚಂದೇಲ್ ಜಿಲ್ಲೆಯ ಚಂದೇಲ್ ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಕಚ್ಚಾ ಬಾಂಬ್ ಸ್ಫೋಟಿಸಿದ್ದು, ಅಸ್ಸಾಂ ರೈಫಲ್ಸ್ನ ಇಬ್ಬರು ಯೋಧರು
ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿಯಿಂದ 64 ಕಿ.ಮೀ ದೂರದಲ್ಲಿರುವ ಮಹಾಮಣಿ ಎಂಬಲ್ಲಿ ಯೋಧರ ಗುಂಪು ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿತು. ಆಗ ಇಂದ್ರ ಸಿಂಗ್ ಮತ್ತು ಸೋಹನ್ ಲಾಲ್ ಮೃತಪಟ್ಟರು.