ಗೆಳತಿಯರ ಕಣ್ಮಣಿಯಂತಿದ್ದ ಆಕೆಯ ಬಟ್ಟಲು ಕಂಗಳಿಗೆ ಕಾಡಿಗೆಯ ಚೌಕಟ್ಟು. ಆತ ಕೃಷ್ಣನಲ್ಲ, ಆಕೆ ರಾಧೆಯಲ್ಲ ಆದರೂ ಅವನ ವೇಣುವಾದನಕ್ಕೆ ಮನಸೋತ ಆಕೆಯ ಕೆನ್ನೆ ಕೆಂಪಾಯಿತು. ಗೆಳತಿಯರ ಈ ಜುಗಲ್ಬಂದಿ ಒಂದು ಸುಂದರ ರೂಪಕದಂತಿತ್ತು.
ಬಾಲಕರೂ ಈ ಬಣ್ಣದ ಲೋಕಕ್ಕೆ ಸಡ್ಡುಹೊಡೆದುಬಿಟ್ಟರು... ಮಕ್ಕಳ ದಿನಾಚರಣೆ ಸಂಬಂಧ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದಿದ್ದ ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ ಬಣ್ಣದ ಕ್ಯಾನ್ವಾಸ್ಗಳನ್ನು ಅಲ್ಲಲ್ಲಿ ನೆಟ್ಟಂತೆ ಭಾಸವಾಗುತ್ತಿತ್ತು. – ಚಿತ್ರಗಳು: ಸತೀಶ್ ಬಡಿಗೇರ್